ನಿನ್ನನೆಲ್ಲಿ ನಿಂದಿಸಿದೆ?

ನಿನ್ನನೆಲ್ಲಿ ನಿಂದಿಸಿದೆ, ಎಲ್ಲಿ ನಿನ್ನ ಹಂಗಿಸಿದೆ?
ಇಲ್ಲದರ್ಥ ಕಲ್ಪಿಸುವೆ ಏನೊ ಮಾತಿಗೆ;
ಯಾಕೆ ಇಂಥ ಇರಿವ ನೋಟ
ನೂರು ದೂರ ಹೊರಿಸುವಾಟ
ಮೂದಲಿಸುವ ಕಹಿವ್ಯಂಗ್ಯ ಮಾತು ಮಾತಿಗೆ?

ಸೆಳಿದು ತಬ್ಬಿ ತೋಳಿನೊಳಗೆ
ಬಾ ಅಪ್ಸರೆ ಎಂದ ಗಳಿಗೆ
ನಾಚಿ ಎದೆಗೆ ಒರಗುತಿದ್ದೆ ಕೆನ್ನೆಯುಬ್ಬಿಸಿ
ಕಣ್ಣಿನೊಳಗೆ ಕಣ್ಣ ಹೂಡಿ
ಸುಳ್ಳು ಮುನಿಸು ತೋರಿ ದೂಡಿ
ಮತ್ತೆ ಅಲ್ಲೆ ನಿಲ್ಲುತಿದ್ದೆ ಏಕೊ ಕಾಯುತ

ಎಲ್ಲಿ ಈಗ ಆ ಪ್ರೀತಿ, ಕಿಲಕಿಲ ನಗೆ ಸುರಿವ ರೀತಿ
ತೋಳು ಜಗ್ಗಿ ಕಾಡುವಾಟ ಏಕೆ ಮರೆಯಿತು?
ಕಿವಿಗೆ ಬಿದ್ದ ಹುಸಿಮಾತಿಗೆ
ಬಿಸಿಯಾಗುವರೇನು ಹೀಗೆ
ಮುಖಕೆ ಮುಖವ ಕೊಟ್ಟು ನೋಡು ಗೆಲಲಿ ನಂಬಿಕೆ.

ಚೆಲುವೆ ಬೇರೆ ಇಲ್ಲ ನನಗೆ
ನೀನೊಬ್ಬಳೆ, ನಿನ್ನ ಒಳಗೆ
ಬೆಳಗುತಿರುವ ಒಲವೆ ನನ್ನ ಬಾಳ ದೀವಿಗೆ;
ಯಾರೊ ಬಿತ್ತಿದಂಥ ಸುಳ್ಳು
ಶಂಕೆ ಸರಿಸಿ ಬಾ ಒಲವೆ
ನಿನಗಾಗೇ ಚಾಚಿ ನಿಂತ ಪ್ರಿಯನ ತೋಳಿಗೆ.
*****
ಪುಸ್ತಕ: ನಿನಗಾಗೇ ಈ ಹಾಡುಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಗಿನ ವಾಯುವಿಹಾರ
Next post ನಗೆ ಡಂಗುರ – ೧೦೬

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys